Friday 12 July 2013

ಡಯಾನಾ(Dayana) ಎನ್ನುವ ಪದ ಸಾಕು ರೋಮಾಂಚನಕ್ಕೆ.......

Daina, the princess of vels
ಬಹುಶಃ ಜಗತ್ತಿನ ಯಾವ ಸಣ್ಣ ಪತ್ರಿಕೆಯೂ ಈಕೆಯ ಒಂದು ಸಣ್ಣ ವರದಿಯನ್ನಾದರೂ ಹಾಕದೇ ಹೋಗಿಲ್ಲ, ಈಕೆಯಷ್ಟು ಛಾಯಾಚಿತ್ರಗಳಿಗೆ ಮುಖಕೊಟ್ಟ ಮಹಿಳೆ ಕೂಡ ಇನ್ನೊಬ್ಬಳಿರಲಿಕ್ಕಿಲ್ಲ. ಕ್ಷಣದಲ್ಲಿಯೂ ಆಕೆ ಬಳಸಿದ ಒಂದು ಸಣ್ಣ ಕರ್ಚೀಫ್‍ನನ್ನೇನಾದರೂ ಹರಾಜಿಗಿಟ್ಟರೆ  ಅದನ್ನು ಲಕ್ಷಗಟ್ಟಲೆ ಕೊಟ್ಟು ಕೊಂಡುಕೊಳ್ಳುವ ಅಭಿಮಾನಿಗಳ ಸಂಖ್ಯೆ ಕಡಿಮೆಯಾಗಿಲ್ಲ. ಬದುಕಿನುದ್ದಕ್ಕೂ contervercy ಗಳೇ ತುಂಬಿ ತುಳುಕಾಡಿದರೂ, ಸತ್ತ ಮೇಲೂ ಅವುಗಳ ಸಂಖ್ಯೆ ಕಡಿಮೆಯಾಗಿಲ್ಲ. ಹೌದು ಅವಳೇ ಡಯಾನಾ  (Dayana), ಜಗತ್ತಿನ ತುಂಬಾ ಆಕೆಯ ಮೋಡಿಗೆ ಮರುಳಾದ ಜನರ ಮಹಾಪೂರವೇ ಇದೆ. ಬರೀ ಡಯಾನಾ ಎನ್ನುವ ಪದ ಸಾಕು ರೋಮಾಂಚನಕ್ಕೆ. ಅವಳೊಂದು ಸಾಯದ ನೆನಪು ಸೌಂದರ್ಯದೊಂದಿಗೆ ಜನ ಸೇವೆ, ತ್ಯಾಗ, ಸಾಮಾಜಿಕ ಚಟುವಟಿಕೆಗಳು ಅವಳ ವ್ಯಕ್ತಿತ್ವಕ್ಕೊಂದು ಹೊಳಪು.
ನಮಗೆಲ್ಲರಿಗೂ ಡಯಾನಾ (Dayana)ಒಬ್ಬ ಅಪ್ರತಿಮ ಸುಂದರಿಯಾಗಿ, ವೆಲ್ಸ್ ರಾಜಕುಮಾರಿಯಾಗಿ ದೊರೆ ಚಾಲ್ರ್ಸ್ ಮಡದಿಯಾಗಿ ಹಲವಾಗಿ ಅನೈತಿಕ ಸಂಬಂಧಗಳಿಂದ ಚರ್ಚೆಗೊಳಪಟ್ಟ ಹೆಣ್ಣಾಗಿ ಗೊತ್ತು. ಆದರೆ ಆಕೆಯ ಸಾಮಾಜಿಕ ಸೇವೆಗಳು, ಆಕೆಯ ಮಾನವೀಯ ಮರುಕ, ಸಂಕಷ್ಟಗಳಿಗೆ ಆಕೆ ಮರುಗುತ್ತಿದ್ದ ರೀತಿ, ಬಡವರಿಗೆ, ದೀನರಿಗೋಸ್ಕರ ಆಕೆ ತುಡಿಯುತ್ತಿದ್ದ ರೀತಿ ಅದೆಷ್ಟು ಜನರಿಗೆ ಗೊತ್ತು?
ಬಹಳ ಸಾರಿ ನಾವಾಕೆಯನ್ನು ಒಂದೇ ದೃಷ್ಟಿಕೋನದಿಂದ ನೋಡಿದ್ದೇವೆ. ಆದರೆ ಆಕೆಯ ಅಂತಃಕರಣದ ಯಾತ್ರೆ ನಮ್ಮಲ್ಲಿ ಬಹಳಷ್ಟು ಜನರಿಗೆ ಗೊತ್ತೇ ಇಲ್ಲ.
ತನ್ನೊಳಗಿನ ಮಿಡಿತಗಳು ಅರಮನೆಯಲ್ಲಿ ಬಂಧಿಯಾಗಿ ಕೊಳೆಯುತ್ತಿರುವುದನ್ನು ಸಹಿಸಲಾಗದೇ ಆಕೆ ಅರಮನೆ, ಅಂತಸ್ತು, ರಾಜ ಹೀಗೆ ಎಲ್ಲರನ್ನು ತೊರೆದು ಬಂದು ಅಪ್ಪಿಕೊಂಡಿದ್ದು ನಿರ್ಗತಿಕರನ್ನು, ರೋಗಿಷ್ಟರನ್ನು. ಬರೀ ರಾಣಿಯಾಗಿ ಎರಡು ಮಕ್ಕಳ ತಾಯಿಯಾಗಿ, ಗೊಂಬೆಯಂತೆ ಸಿಂಗರಿಸಿಕೊಂಡು ಅತ್ತಿಂದಿತ್ತ ಓಡಾಡಿಕೊಂಡಿರುವಲ್ಲಿ ಅವಳಿಗ್ಯಾವ ತೊಂದರೆಯಿರಲಿಲ್ಲ. ಆದರೆ ಬದುಕನ್ನು ಸಾರಾ ಸಗಟಾಗಿ ತೊರೆದು ತನ್ನ ಬದುಕನ್ನು ತಾನೇ ಗಾಳಿಗೊಡ್ಡಿಕೊಳ್ಳುತ್ತಾಳೆ.
ಗಣಿಗಾರಿಕೆಯ ವಿರುದ್ಧ ಮೊದಲು ದನಿಯೆತ್ತಿದ್ದು ಡಯಾನಾ. ಆಂಗೋಲಾ ಗಣಿಗಾರಿಕೆಯಿಂದಾದ ವಿನಾಶಕಾರಿ ಬೆಳವಣಿಗೆಗಳ ವಿರುದ್ಧ ಮಾತಾಡಿ ಅದರಿಂದ ಹಾನಿಗೊಳಗಾದ ರೋಗಿಗಳ ಅನಾಥರ ರಕ್ಷಣೆಗಾಗಿ ನಿಂತವಳು ಅವಳು. ಜೂನ್ 12, 1997ರಲ್ಲಿ ಗಣಿಗಾರಿಕೆಯ ವಿರುದ್ಧ ಅವಳೊಂದು ಭಾಷಣ ಮಾಡಿದ್ದಾಳೆ, ಅದರ ವಿವರಣೆ ನಿಮಗಾಗಿ ಕನ್ನಡದಲ್ಲಿ.. .. .. ..
* ಆಧುನಿಕ ದುರಂತ ಮತ್ತು ಅದರ ಪ್ರತಿಫಲಗಳು - 12 ಜೂನ್ 1997ರಲ್ಲಿ ಗಣಿಗಾರಿಕೆಯನ್ನು ವಿರೋಧಿಸಿ ಡಯಾನಾಳ ಭಾಷಣ
ಮಹಿಳೆಯರೇ ಮತ್ತು ಸಭ್ಯಗೃಹಸ್ಥರೆ... ಮೈನ್ಸ್ ಅಡ್ವೈಸರಿ ಗ್ರೂಪ್ ಮತ್ತು ಲ್ಯಾಂಡ್ ಮೈನ್ಸ್ ಸರ್ವೈಯರ್ಸ್ ನೆಟ್‍ವರ್ಕ್    ಎರಡೂ ಸಂಘಟನೆಗಳಿಂದ ನಾನು ಎಷ್ಟೊಂದು ಹೃತ್ಪೂರ್ವಕವಾಗಿ ಸ್ವಾಗತಿಸಲ್ಪಟ್ಟಿದ್ದೇನೆ ಎನ್ನುವುದನ್ನು ತಿಳಿಸುತ್ತಲೇ ನಾನು ನನ್ನ ಉಪನ್ಯಾಸವನ್ನು ಪ್ರಾರಂಭಿಸಬೇಕು. ಇದು ಅತ್ಯಂತ ಆತ್ಮೀಯ ಭೆಟ್ಟಿ, ಯಾಕೆಂದರೆ ಪ್ರಪಂಚಕ್ಕೆ, ಇಲ್ಲಿ ಹಾಳಾಗುತ್ತಿರುವ ಜೀವನ, ಭೂಮಿ, ಅತ್ಯಂತ ಕಡುಬಡವರ ಪರಿಸ್ಥಿತಿಯ ಅರಿವು ಇಲ್ಲದೇ ಇರುವುದಕ್ಕಾಗಿ ಅದನ್ನು ತಿಳಿಸುವುದು ಅಲ್ಲದೆ, ಇಂದು ಮುಂಜಾನೆ ಅಂಗೋಲಾದ ನನ್ನ ಭೇಟಿಯವರೆಗೂನಿಮ್ಮನ್ನುದ್ದೇಶಿಸಿ ಮಾತನಾಡುವ ಕ್ಷಣದವರೆಗೂ, ಗಣಿಗಾರಿಕೆ ಕುರಿತ ನನ್ನ ತಿಳುವಳಿಕೆ ಅಷ್ಟಕ್ಕಷ್ಟೇ ಆಗಿತ್ತು.
ಗಣಿಗಾರಿಕೆ ಎನ್ನುವುದು ನಿಧಾನ ಮತ್ತು ನಿರಂತರ ಕೊಲೆ. ಇದರ ಹೋರಾಟ ಮುಗಿಯುತ್ತಲೇ ಇದಕ್ಕೆ ಬಲಿಯಾದ ಮುಗ್ಧರು, ಗಾಯಾಳುಗಳು ನಮಗೆ ಗೊತ್ತಿಲ್ಲದ ಯಾವುದೋ ರಾಷ್ಟ್ರದಲ್ಲಿ ಯಾವುದೇ ಧ್ವನಿಯಿಲ್ಲದೇ ಸತ್ತು ಹೋಗಿದ್ದಾರೆ. ದುರ್ದೈವದ ಅವರ ಒಂಟಿಧ್ವನಿ ಎಲ್ಲಿಯೂ ವರದಿಯಾಗುವುದಿಲ್ಲ. ಪೂರ್ವಾಗ್ರಹ ಪೀಡಿತವಾದ ಪ್ರಪಂಚ ಹೀಗೆ ಪ್ರತಿ ತಿಂಗಳು ಸಾಯುವ ಹೆಣ್ಣುಮಕ್ಕಳು ಮತ್ತು ಸಣ್ಣ ಮಕ್ಕಳ ಬಗ್ಗೆಯಾಗಲೀ, ಸಾಯದೇ ಅಂಗಹೀನರಾಗಿ ನರಳಾಡುವ 1200 ಜನರ ಬಗ್ಗೆಯಾಗಲೀ, ಒಂದಿಷ್ಟೂ ಆತಂಕಕ್ಕೊಳಗಾಗದೇ, ಇಂಥವರ ಸಾವಿಗೆ ಬೆಚ್ಚಿಬೀಳದೆ ಸಾಗಿ ಹೋಗುತ್ತದೆ. ಬ್ರಿಟನ್‍ದ e ಅಡಿoss ಸಂಸ್ಥೆಯೊಂದಿಗೆ ಜನವರಿಯಲ್ಲಿ ಅಂಗೋಲಾಕ್ಕೆ ನಾನು ಭೇಟಿ ಕೊಟ್ಟದ್ದು, ದೇಶದಲ್ಲಿ 15ಮಿಲಿಯನ್ ಗಣಿಕೇಂದ್ರಗಳಿದ್ದು, 10ಮಿಲಿಯನ್ ಜನತೆ ಕೆಲಸದಲ್ಲಿ ಪ್ರಪಂಚವನ್ನೇ ತಮ್ಮೆಡೆಗೆ ಗಮನಸೆಳೆಯುವ ಉದ್ದೇಶದಿಂದ ತೊಡಗಿಸಿಕೊಂಡಿದ್ದಾರೆ. ಆದರೆ ಇದು ಅನಾಹುತಕಾರಿಯಾಗಿದೆ.
ಕೆಲವು ಜನರು ನನ್ನ ಭೇಟಿಗೂ ರಾಜಕೀಯ ಬಣ್ಣ ಲೇಪಿಸಲು ಯತ್ನಿಸಿದ್ದಾರೆ. ಆದರೆ ನನ್ನದು ರಾಜಕೀಯ ಭೇಟಿಯಲ್ಲ ಮತ್ತು ನಾನು ರಾಜಕಾರಣಿಯೂ ಅಲ್ಲ. ಹಿಂದೆ ಹೇಳಿದಂತೆ, ಈಗಲೂ ಹೇಳುವಂತೆ ನನ್ನ ಕಾಳಜಿ ಮಾನವೀಯತೆಯದು. ಅಂತೆಯೇ ಮಾನವ ದುರಂತ ನನ್ನ ಗಮನವನ್ನು ಸೆಳೆದರೆ ಪ್ರಪಂಚದುದ್ದಕ್ಕೂ ಗಣಿಗಾರಿಕೆಯ ಪ್ರಕ್ರಿಯೆ ನಿಲ್ಲಬೇಕೆನ್ನುವುದೇ ನನ್ನ ಹೋರಾಟದ ಉದ್ದೇಶವಾಗಿದೆ. ಅಂಗೋಲಾದ ನನ್ನ ದಿನಗಳಲ್ಲಿ ಪ್ರಕ್ರಿಯೆಯ ಮೂರು ದುಷ್ಪರಿಣಾಮಗಳನ್ನು ನಾನು ನೋಡಿದ್ದೇನೆ-
1. ರುವಾಂಡಾದಲ್ಲಿಯ ಆಸ್ಪತ್ರೆಗಳು
2. ಹಣದ ವಿಪರೀತ ಶೇಖರಣೆ
3. ಆಂತರಿಕ ಕಲಹ.
ಗಣಿಗಾರಿಕೆಯಿಂದ ಬದುಕುಳಿದ ಕೆಲವು ದುರ್ದೈವಿಗಳನ್ನು ನಾನು ನೋಡಿದ್ದೇನೆ. ಗಾಯಾಳುಗಳನ್ನು ನಾನು ಕಂಡಿದ್ದೇನೆ. ಗಾಯಗಳನ್ನು ನನ್ನಿಂದ ವಿವರಿಸಲಾಗದು. ಯಾಕೆಂದರೆ ನನ್ನ ಅನುಭವದ ಪ್ರಕಾರ ಬಹಳಷ್ಟು ಜನರನ್ನು  ಅದು ಬಹುದೂರ ಒಯ್ಯುತ್ತದೆ. ಇಷ್ಟು ಮಾತ್ರ ಹೇಳಬಲ್ಲೆ, ಗಣಿಗಾರಿಕೆಯ ಕಾಲ್ತುಳಿತಕ್ಕೊಳಗಾದ ದೇಹಗಳನ್ನು, ಮಕ್ಕಳನ್ನು ನೀವು ನೋಡಿದಾಗ ಅವರು ಬದುಕುಳಿದ ರೀತಿಗೆ ನೀವು ಆಶ್ಚರ್ಯ ಪಡದೆ ಇರುವುದಕ್ಕಾಗುವುದಿಲ್ಲ. ಗಾಯಗಳ ಅತ್ಯಂತ ಕ್ರೂರ ಮುಖವೆಂದರೆ ಅವು ಅವರಿಗೆ ನೀಡಿದ ಯಾತನೆ ಮತ್ತು ವೈದ್ಯಕೀಯ ಅನಾನುಕೂಲತೆಗಳ ಅಧ್ವಾನ ಸ್ಥಿತಿ.
ಕೆಲವು ಆಸ್ಪತ್ರೆಗಳಲ್ಲಿ ಸ್ವತಃ ನಾನೇ ವೈದ್ಯಕೀಯ ಸಲಕರಣೆಗಳ ಪೂರೈಕೆಯಲ್ಲಿರುವ ತೊಂದರೆಯನ್ನು ಗಮನಿಸಿದ್ದೇನೆ. ಇಂಥಲ್ಲಿ ಒಮ್ಮೊಮ್ಮೆ ಇದ್ದಕ್ಕಿದ್ದಂತೆ ಔಷಧಿಗಳ ಕೊರತೆಯಾಗುತ್ತಿದೆ. ಅತ್ಯಂತ ಅವಶ್ಯವಾದ ಂಟಿಚಿesheiಛಿs ಮತ್ತು ನೋವು ನಿವಾರಕ ಮಾತ್ರೆಗಳ ಅಭಾವ ಕಂಡುಬರುತ್ತದೆ. ಗಾಯಗಳನ್ನು ಸುಧಾರಿಸುವ ಕಾರ್ಯದಲ್ಲಿ ತೊಡಗಿರುವ ವೈದ್ಯರಿಗೆ ನಿರೀಕ್ಷಿತ ಸಮಯದಲ್ಲಿ ಅವಶ್ಯಕ ಸೌಲಭ್ಯ ಸಿಗದೇ ಹೋಗುತ್ತವೆ. ಹೀಗಾಗಿ ಮನುಷ್ಯರು ಇಲ್ಲಿ ಅನುಭವಿಸುವ ಯಾತನೆ ನಮ್ಮ ಕಲ್ಪನೆಗೂ ನಿಲುಕದ್ದಾಗಿದೆ. ಇಷ್ಟೆಲ್ಲ ಮಾತನಾಡಿ ನಾನು ಕೇಳುತ್ತಿರುವುದು ಒಂದಿಷ್ಟು ಯೋಗ್ಯವೆನಿಸುವ ಬದುಕಿಗಾಗಿ ಬೇಕಾಗುವ ಪ್ರಾಥಮಿಕ ಚಿಕಿತ್ಸಾ ವ್ಯವಸ್ಥೆಯನ್ನು, ಯಾರು ಒಂದಿಷ್ಟು ಭೂಮಿ ಅಥವಾ ತಮ್ಮ ಕೈ ಅಥವಾ ಕಾಲು ಕಳೆದುಕೊಂಡಿರುವರೋ ಅದು ಅವರ ಜೀವನದುದ್ದಕ್ಕೂ ಯಾತನೆ ನೀಡುವ ಹಾನಿ.
ರೆಡ್‍ಕ್ರಾಸ್ ಸಂಸ್ಥೆ ದೇಹದ ಮುರಿದ ಭಾಗಗಳನ್ನು ಪುನರ್ ಜೋಡಿಸುವ ಮೂಲಕ ಮಾನವತೆಗೆ ತನ್ನ ಅದ್ಭುತ ಸೇವೆಯನ್ನಿಲ್ಲಿ ಸಲ್ಲಿಸಿದೆ. ಆದರೆ ದೇಹದ ಯಾವುದೋ ಒಂದು ಭಾಗವನ್ನು ನೈಜದಂತೆ ಸಿದ್ಧಪಡಿಸುವ ಶಕ್ತಿ ಅದಕ್ಕಿಲ್ಲ. ಉದಾಹರಣೆಗೆ ಒಂದು ಮಗು ಬೆಳೆದಂತೆ ಅನೇಕ ದೈಹಿಕ ಕ್ಷಮತೆಗಳನ್ನು ಬೆಳೆಸಿಕೊಳ್ಳಬೇಕಾಗುತ್ತದೆ. ಆದರೆ ಗಣಿಗಾರಿಕೆಗಳ ಗಾಯಗಳು ಅವನನ್ನು ಶಾಶ್ವತವಾಗಿ ಕ್ಷಮತೆಗಳಿಂದ ವಂಚಿತನನ್ನಾಗಿ ಮಾಡುತ್ತವೆ. ಅಂತೆಯೇ ನಾನು ಹೇಳುತ್ತಿರುವದು ಕಳೆದುಕೊಂಡ ಕಾಲುಗಳನ್ನೋ ಅಥವಾ ಕೈಗಳನ್ನೋ ಸಹಜವೆನ್ನಿಸುವಂತೆ ಮಾಡುವ ವಿಜ್ಞಾನವೊಂದು ಹುಟ್ಟಿಯೇ ಇಲ್ಲ.
ಆದರೆ ರೆಡ್‍ಕ್ರಾಸ್ ಸಂಸ್ಥೆ ಹೇಳಿರುವಂತೆ  ಗಣಿಗಾರಿಕೆಯಲ್ಲಿ ಅಳಿದುಳಿಯುವ ಪ್ರತಿಯೊಬ್ಬ ಗಾಯಾಳು, ಕಾರ್ಮಿಕ, ಪ್ರತಿ ತಿಂಗಳು 2-3 ಸಾವಿರ ರೂ. ವೆಚ್ಚ ಭರಿಸುವ ಗಾಯವೊಂದನ್ನು ಹೊತ್ತು ತಿರುಗುತ್ತಾನೆ ಎಂದು.
ಇಂಥ ಬಡ ರಾಷ್ಟ್ರದ ಬಡಕಾರ್ಮಿಕನೊಬ್ಬನಿಗೆ ಇದು ಅತ್ಯಂತ ದುಬಾರಿ ಹೊರೆ. ಇವು ಪ್ರಪಂಚದ ಎಲ್ಲ ರಾಷ್ಟ್ರಗಳು ತಕ್ಷಣ ಹೊರಳಿ ನೋಡಬೇಕಾದ ಒಂದು ತುರ್ತು. ಅಂಗೋಲಾದ ಪ್ರತೀ 334 ಸದಸ್ಯರಲ್ಲೊಬ್ಬ ಅಂಗಹೀನ ಸಿಗುತ್ತಾನೆ. ಅಂಗೋಲಾದಲ್ಲಿಯೇ ಪ್ರಪಂಚದ ಅತೀ ಹೆಚ್ಚು ಅಂಗವಿಕಲರು ಸಿಗುತ್ತಾರೆ. ಆದರೆ ಯುದ್ಧಾಯುಧಗಳನ್ನು ಜಗತ್ತಿಗೆ ಸರಬರಾಜು ಮಾಡಿ ಮೋಜು ನೋಡುವ ರಾಷ್ಟ್ರಗಳಿಗೆ ಒಂದು ಮಾನವೀಯ ಅಧಃಪತನದೆಡೆಗೆ ಲಕ್ಷ್ಯ ವಹಿಸಲು ಸಮಯವುಂಟೇ?
ನನ್ನ ಮೂರನೆಯ ಕಾಳಜಿ, ಭೂಮಿಯ ಮೇಲೆ ಶಾಶ್ವತವಾಗಿ ಗಣಿಗಾರಿಕೆ ನಿಲ್ಲಿಸುವ ಮಾರ್ಗವನ್ನು ಹುಡುಕುವದಾಗಿದೆHallow Trust ಪ್ರದೇಶಗಳಲ್ಲಿ  ಕೆಲವು ಸದಸ್ಯರೊಂದಿಗೆ ನಾನೊಂದು ಮುಂಜಾವನ್ನು ಕಳೆದೆ. ಅಲ್ಲಿ ಅತ್ಯಂತ ಅಪಾಯದ ಗಣಿಗಳಲ್ಲಿ ಕೆಲಸ ನಿರ್ವಹಿಸುವ ಕುರಿತು ಕಾರ್ಮಿಕರಿಗೆ ತರಬೇತಿ ನೀಡಲಾಗುತ್ತದೆ ಮತ್ತು ಅವರ ಕಾರ್ಯವೈಖರಿಯ ಮೇಲೆ ನಿಗಾ ಇಡಲಾಗುತ್ತದೆ. ಎರಡೂ ಸಂಘಟನೆಗಳ ಸದಸ್ಯರನ್ನು ನಾನು ನಮ್ಮ ಟೀಮಿನ ಜನತೆ ಎಂದು ಸಂಬೋಧಿಸಿದ್ದೇನೆ. ಏಕೆಂದರೆ ಇಲ್ಲಿ ಇವರು ಕೆಲಸ ಮಾಡುತ್ತಿರುವುದು ಅವರ ಸಂಕಷ್ಟಗಳನ್ನು ಬಗೆಹರಿಸುವ ನಿಟ್ಟಿನಲ್ಲಿ. ನಮ್ಮೆಲ್ಲರ ಅನುಪಸ್ಥಿತಿಯಲ್ಲಿ ಕೆಲಸ ಮಾಡುತ್ತಿರುವ ಇವರಿಗೆ ನನ್ನ ಗೌರವ ಸಲ್ಲಿಸುತ್ತೇನೆ. ಏಕೆಂದರೆ ಅವರ ಸೇವೆ ಬರೀ ಗಣಿಗಾರಕೆಯ ಸುತ್ತಲಿನ ದುರಂತಗಳಿಗಷ್ಟೇ ಸೀಮಿತವಾಗಿಲ್ಲMines Advisory Groupಇಬ್ಬರು ಸದಸ್ಯರುಗಳಾದ Claris Howays ಮತ್ತು Hown Harthರು ಕಾಂಬೋಡಿಯಾದಲ್ಲಿ ಇತ್ತೀಚೆಗೆ ಅಪಹರಿಸಲ್ಪಟ್ಟರು. ಇವರುಗಳು ಸುರಕ್ಷಿತವಾಗಿ ಬಂದು ನಮ್ಮನ್ನು ಸೇರಲಿ ಎಂದಷ್ಟೇ ನಾವು ಪ್ರಾರ್ಥಿಸಬಹುದಾಗಿದೆ.
ಅಂಗೋಲಾದ ನೆಲದಲ್ಲಿ ಮನುಷ್ಯನ ವಿನಾಶಕ್ಕಾಗಿಯೇ ಎನ್ನುವ ಹಾಗೆ ಗಣಿಗಳ ವಿನ್ಯಾಸವಿದೆ. ಇಲ್ಲಿ ದುಡಿಯುವ ಜೀವಗಳು ನಿರಂತರವಾಗಿ ಸಂಕಷ್ಟದಲ್ಲಿವೆ. ಅಂಗೋಲಾದ ನನ್ನ ಭೇಟಿಯ ನಂತರ ಗಣಿಗಳನ್ನು ತೆಗೆದು ಹಾಕುವಲ್ಲಿ ಯಾವ ಮಾರ್ಗ ಸಾಧ್ಯವಿದೆ? ಎಂದೆಲ್ಲ ಯೋಚಿಸಿದ್ದೇನೆ. ಅತ್ಯಂತ ಕಳಪೆ ಮತ್ತು ಸೋವಿಯಾಗಿರುವ ಗಣಿಗಳನ್ನು ಪತ್ತೆ ಹಚ್ಚುವುದು ಅಥವಾ ನಾಶ ಪಡಿಸುವದು ಉತ್ಪಾದನೆಯ ನೂರುಪಟ್ಟು ದುಬಾರಿಯ ಕೆಲಸವಾಗಿದೆ.
ಅಂಗೋಲಾ ದೀರ್ಘ ಯುದ್ಧದ ನಂತರ ಮರಳಿ ಬಂದ ನಿರಾಶ್ರಿತರಿಂದ ತುಂಬಿದೆ. ಇದು ಸಮಾಜದ ದುರಂತದ ಇನ್ನೊಂದು ಮುಖ. ಇದು ಎಷ್ಟೋ ಜನರಿಗೆ ಇಲ್ಲಿ ತಮ್ಮ ಅನುಪಸ್ಥಿತಿಯಲ್ಲಿ ತಮ್ಮ ನೆಲದಲ್ಲಿ ಏನು ನಡೆಯಿತೆಂಬುದರ ಅರಿವಿಲ್ಲ. ಅವನಿಗೆ ಗೊತ್ತಿರುವುದೊಂದೇ ಗಣಿಗಾರಿಕೆ. ಬದುಕಿನ ಸಾಮಾನ್ಯ ಹಕ್ಕುಗಳಿಗಾಗಿ ಹೋರಾಡುವ ಜನರಿಂದ ಗಣಿಗಾರಿಕೆಯ ಮೂಲ ಸೌಲಭ್ಯಗಳನ್ನು ಕೂಡ ಕಿತ್ತು ಹಾಕಿದೆ. ಹೀಗಾಗಿ ಉರುವಲು ಕಟ್ಟಿಗೆಯನ್ನು ಹುಡುಕಿ ತರುವಲ್ಲಿ ವಿಫಲವಾಗುವ ಹೆಂಡಂದಿರನ್ನು, ತಾಯಂದಿರನ್ನು, ಅಜ್ಜಿಯರನ್ನು ಹಿಡಿಯುವುದರಲ್ಲಿ ಅವರ ಬದುಕಿನ ನೆಮ್ಮದಿ ಹಾಳಾಗಿದೆ.
ಪ್ರಪಂಚದ ಅನೇಕ ಸಂಘಟನೆಗಳಿಂದ Mine Awareness ಕೆಲಸ ನಡೆದಿರುವುದು ನನಗೆ ಅತೀವ ಖುಷಿ ತಂದಿದೆ. ಈಗ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದಾದರೆ ವಯಸ್ಕರಿಗೆ ತಾವು ಏನು ಮಾಡಬೇಕು ಮತ್ತು ಏನು ಮಾಡಬಾರದೆನ್ನುವ ತಿಳುವಳಿಕೆ ನೀಡಿದ್ದಾದರೆ, ಗಣಿಗಾರಿಕೆಯನ್ನು ಶಾಶ್ವತವಾಗಿ ನಿಲ್ಲಿಸಿಬಿಟ್ಟರೆ ಕೆಲವಷ್ಟಾದರೂ ಜೀವಗಳು ಉಳಿಯುತ್ತವೆ ಮತ್ತು ಗಾಯ ಕಡಿಮೆಯಾಗುತ್ತವೆ. ಪ್ರಪಂಚದುದ್ದಕ್ಕೂ ನಮ್ಮ ಸುತ್ತ 110 ಮಿಲಿಯನ್ ಗಣಿಗಾರಿಕೆ ಚಟುವಟಿಕೆಗಳು ನಡೆದಿವೆ ಎಂದು ನಾನು ಕೇಳಿದ್ದೇನೆ. ಅದರಲ್ಲಿ ಸರಾಸರಿ 75 ಪ್ರತಿಶತ ಆಫ್ರಿಕಾದಲ್ಲಿಯೇ ಕ್ರಿಯಾಶೀಲವಾಗಿವೆ. ಅದರಲ್ಲೂ ಅಂಗೋಲಾ ಒಂದರಲ್ಲಿಯೇ ಅತೀ ಹೆಚ್ಚಿನ  ಸಂಖ್ಯೆಯ ಗಣಿಕೇಂದ್ರಗಳಿವೆ. ಏಕೆಂದರೆ ಯುದ್ಧ ಎಷ್ಟೊಂದು ದೀರ್ಘಕಾಲದವರೆಗೆ ನಡೆದಿದೆ ಮತ್ತು ನೆಲವನ್ನೆಲ್ಲ ಆಕ್ರಮಿಸಿಕೊಂಡಿದೆ. ಹೀಗಾಗಿ ಇನ್ನೂ ಹೆಚ್ಚಿನ ದುರಂತ ಇಲ್ಲಿ ನಿರೀಕ್ಷಿತ.
ಕ್ಷಣದಲ್ಲಿಯೇ ಇದನ್ನು ನಾವು ನಿಲ್ಲಿಸಿದಾಗ್ಯೂ ಕೂಡ ಬರುವ ಅನೇಕ ದಿನಗಳವರೆಗೂ ಭೂಮಿಯ ಮೇಲಿನ ಅನೇಕ ಸಣ್ಣ ಪುಟ್ಟ ರಾಷ್ಟ್ರಗಳಿಗೆ ರೋಗ  ವ್ಯಾಪಿಸಿಕೊಂಡೇ ಇರುತ್ತದೆ - ಏಕೆಂದರೆ The Evil  that Men do lives after them”

ಅಂತೆಯೇ ನಾನಂದುಕೊಂಡಿದ್ದೇನೆ, ನಮ್ಮ ಹೆÀಗಲುಗಳ ಮೇಲೆ ಕೆಲವು ಜವಾಬ್ದಾರಿಗಳಿವೆ.
ಅಂಗೋಲಾಕ್ಕೆ ಭೇಟಿ ಕೊಡುವ ನನ್ನ ಹಲವು ಉದ್ದೇಶಗಳಲ್ಲಿ ಒಂದು ಮಾನವೀಯ ಕಾರ್ಯದಲ್ಲಿ ತೊಡಗಿರುವ e ಅಡಿoss ಸಂಸ್ಥೆಯನ್ನು ಸಮರ್ಥಿಸುವುದು ಮತ್ತು ಅಂತರ್‍ರಾಷ್ಟ್ರೀಯ ಒತ್ತಡ ಹೇರಿ ಗಣಿಗಾರಿಕೆಯನ್ನು ನಿಲ್ಲಿಸುವುದು. ಇದನ್ನೊಂದು ವೇಳೆ ನಾವು ಸ್ಥಾಪಿಸುವುದಾದರೆ ಮನುಷ್ಯತ್ವದಲ್ಲಿ ನಿಜಕ್ಕೂ ಒಂದಿಷ್ಟು ಪ್ರಗತಿಯನ್ನು ಕಂಡಂತೆ. ಮತ್ತು ಪ್ರಪಂಚದ ಕೆಲವು ಭಾಗದಲ್ಲಿಯಾದರೂ ಹೃದಯವಂತಿಕೆಯನ್ನು ಹೆಚ್ಚಿಸಿಕೊಂಡಂತೆ. ಒಂದು ವೇಳೆ ಅಂತಾರಾಷ್ಟ್ರೀಯ ಒತ್ತಡ, ಕೆಲಸ ಮಾಡಿ ಗಣಿಗಾರಿಕೆ ನಿಂತು ಹೋದರೆ ಈಗ ಅಸ್ತಿತ್ವದಲ್ಲಿರುವ ಮಾನವ ಜನಾಂಗದ ಮೊಮ್ಮಕ್ಕಾಳಾದರೂ ಭೂಮಿಯನ್ನು ವಾಸಿಸಲು ಯೋಗ್ಯ ಸ್ಥಳವೆಂದು ಘೋಷಿಸಲು ಸಾಧ್ಯವಾಗುತ್ತದೆ.
ಮುಂದುವರಿದ ರಾಷ್ಟ್ರಗಳಲ್ಲಿ ಮಾತ್ರ ತಲೆಮಾರಿಗೆ ವಿಶ್ರಾಂತಿಯೆನ್ನುವುದಿಲ್ಲ. ಏಕೆಂದರೆ ಗಣಿಗಾರಿಕೆ ಎಂಬ ಭೀಕರ ಅಪಘಾತದ ಗಾಯಗಳು ನಮ್ಮೊಂದಿಗಿವೆ ಹಾಗೂ ನಮ್ಮೊಂದಿಗೇ ಮುಂದುವರೆಯುತ್ತದೆ. ಗಣಿಗಳನ್ನು ಮುಚ್ಚುವ, ಕಂಡು ಹಿಡಿಯುವ ಕೆಲಸ ಅತ್ಯಂತ ನಿಧಾನವಾಗಿದೆ. ಇದನ್ನು ಇನ್ನಷ್ಟು ತೀವ್ರಗೊಳಿಸಲಾಗದೆ...? ಎನ್ನುವ ಪ್ರಶ್ನೆಗೆ ಸರಳ ಉತ್ತರವಿಲ್ಲ. ಏಕೆಂದರೆ ನಾವು ಅಭಿವೃದ್ಧಿ ಮಂತ್ರ ಜಪಿಸುತ್ತಿದ್ದೇವೆ.

ಪ್ರಪಂಚ ಸುಂದರವಾಗಿರುವುದು ಆಫ್ರಿಕಾ ಮತ್ತು ಏಷಿಯಾಗಳಲ್ಲಿ, ಗಣಿಗಾರಿಕೆಗೆ ಬಲಿಯಾಗಿ ಜೀವನ ಮಟ್ಟವನ್ನು ಸುಧಾರಿಸುವಲ್ಲಿ ಕಾರ್ಯನಿರತವಾಗಿರುವವರು ಸ್ವಯಂ ಸೇವಾ ಸಂಘಟನೆಗಳಿಂದ ಖಂಡಿತವಾಗಿಯೂ ಪ್ರಗತಿ ಸಾಧ್ಯ. ಬರೀ ಸರ್ಕಾರಗಳಿಂದಲ್ಲ. ಆದರೆ ಇಂಥ ಕಾರ್ಯಗಳೂ, ಸಂಘಟನೆಗಳೂ ಗಣಿಗಾರಿಕೆಯ ಕರಾಳ ನೆರಳಿನಿಂದ ಮುಕ್ತವಾಗಿಲ್ಲ. ನಿರಾಶ್ರಿತರ ಪುನರ್‍ವಸತಿಯಂತೂ ಬಗೆಹರಿಯದ ಸಮಸ್ಯೆಯಾಗಿದೆ. ಒಳ್ಳೆಯ ಫಲವತ್ತಾದ ಭೂಮಿ ದುಸ್ಸಾಧ್ಯವಾಗಿದೆ. ಇದಕ್ಕಾಗಿ ಹೋರಾಡುವ ಸೇವಕರ ಬದುಕು ಗಂಡಾಂತರದಲ್ಲಿವೆ. ಇಂಥ ಸ್ಥಿತಿಯಲ್ಲಿರುವ ನಿನ್ನೆ ಮತ್ತು ಇಂದುಗಳ ಮಧ್ಯದ ಜನರನ್ನು ನಾವು ಪ್ರೀತಿಯಿಂದ ಕಾಣಬೇಕಿದೆ. ನಾನಂದುಕೊಳ್ಳುತ್ತೇನೆ, ಇದು ನಮ್ಮಿಂದ ಸಾಧ್ಯವಿದೆ. ಇದು ನಮಗೂ ಉಪಕಾರಿಯಾಗಿದೆ ಮತ್ತು ಅವರಿಗೂ ಕೂಡ. ಗಣಿಗಾರಿಕೆಯ ಪಿಡುಗನ್ನು ಭೂಮಿಯಿಂದ ಅಳಿಸಿಹಾಕುತ್ತಲೇ ಮನುಷ್ಯತ್ವದ ಸುಂದರವಾದ ಸೌಧ ನಮ್ಮಿಂದ ತನ್ನಷ್ಟಕ್ಕೆ ತಾನೇ ಅನಾವರಣಗೊಳ್ಳುತ್ತದೆ.

No comments:

Post a Comment